Saturday, July 10, 2010

ಇದು ವಿಧಾನಸಭೆಯೇ ಅಥವಾ ರಣರಂಗವೇ ನೀವೇ ಹೇಳಿ .

ನಾಚಿಕೆಗೇಡು.
ಪತ್ರಿಕೆ ಮತ್ತು ಮಾಧ್ಯಮಗಳು ಚಿತ್ರಣ ವನ್ನು ಇಡಿ ವಿಶ್ವಕ್ಕೆ ತೋರಿಸುವಾಗ ನಮ್ಮ ಕರ್ನಾಟಕ ರಾಜ್ಯದ ಮಾನ ಮತ್ತು ಮರ್ಯಾದೆಯ ಬಗ್ಗೆ ಸದಸ್ಯರು ಚಿಂತಿಸಿದ್ದರೆಯೇ .ಅವರಿಗೆ [ರಾಜಕಾರಣಿಗಳು ] ಮಾನ ಇಲ್ಲದೆ ಇರಬಹುದು .ರಾಜ್ಯದ ಜನತೆ ಎಷ್ಟು ನೊಂದಿರಬಹುದು ನೀವೇ ಹೇಳಿ .ಇಲ್ಲಿ ನಮ್ಮದೇ ತಪ್ಪು ಎದ್ದು ಕಾಣಿಸುತ್ತದೆ .ಏಕೆಂದರೆ ಇಂತವರಿಗೆ ಟಿಕೆಟ್ ಕೊಟ್ಟು ಸದನಕ್ಕೆ ಆರಿಸಿ ಬಂದಿದ್ದರಲ್ಲವೇ ಕುರ್ಚಿ ಮತ್ತು ಹಣ ,ಸ್ವಾರ್ಥಕ್ಕಾಗಿ ಬಂದಂತಹ ಇ ಮಹಾ ಶಯರಿಂದ ಜಗಳ ,ಅನಾಗರಿಕತೆ ಬಿಟ್ಟು ಏನನ್ನು ಅಪೇಕ್ಷಿಸ ಬಹುದು ನೀವೇ ಹೇಳಿ
ಪಕ್ಷಗಳ ರಾಜಕೀಯ ಬಿಟ್ಟು ರಾಜ್ಯದ ಜನತೆಯ ಸುಖ : ದುಖ ದ ಜ್ಞಾನ ಬರುವುದು ಯಾವಾಗ .ಮುಖ್ಯ ಮಂತ್ರಿ ಅಥವಾ ಇತರ ಮಂತ್ರಿಗಳ ರಾಜಿನಾಮೆಯಿಂದ ಸಮಸ್ಯೆ ಬಗೆಹರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ .ಪಕ್ಷಗಳು ವೈರಿಗಳು ಎನ್ನುವ ಭಾವನೆ ಉದ್ಭವ ವಾಗಿದೆ.
ರಾಜಕೀಯ ಕೀಳುಮಟ್ಟದ ಹೀನ ಪರಿಸ್ತಿತಿ ಕಾಣುತ್ತಿದೆ .
ರಾಜ್ಯದ ಜನತೆ ತುಂಬಾ ನೊಂದುಕೊಂಡು ಅಸಹಾಯಕತೆ ವ್ಯಕ್ತ ಪಡಿಸುತ್ತಾರೆ .
ಆಶಾಭಾವನೆಯೊಂದಿಗೆ ಮುಂದಿನ ದಿನಗಳು ವಿಕಾಸದತ್ತ ಸಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ .
ಕುಂದಾಪುರ ನಾಗೇಶ್ ಪೈ .

0 Comments:

Post a Comment

Subscribe to Post Comments [Atom]

<< Home