Thursday, March 25, 2010

ಈ - ಪ್ರಪ೦ಚ: ಪಶ್ಚಿಮ ಘಟ್ಟಗಳ ಬೆನ್ನುಹತ್ತಿ....

ಈ - ಪ್ರಪ೦ಚ: ಪಶ್ಚಿಮ ಘಟ್ಟಗಳ ಬೆನ್ನುಹತ್ತಿ....

Thursday, March 11, 2010

ಪಿಂಕಿಯ ನೆನಪಿಗೆಪಿಂಕಿ ಯ ಸ್ಮರಣೆಗಾಗಿ ಇದು ಒಂದು ಲೇಖನ . ಪಿಂಕಿ ಎಂದರೆ ನಮ್ಮ ಮುದ್ದಿನ ಒಂದು ಸಾಕು ನಾಯಿ . ಇದರ ಸಾವಾಗಿ ದಿನಾಂಕ ೧೩ ರಂದು ೩ ವರ್ಷ ಕಳೆದವು . ಇದು ಒಂದು ಪ್ರಾಣಿ .

ಪಿಂಕಿ ಯ ಸ್ಮರಣೆಗಾಗಿ ಇದು ಒಂದು ಲೇಖನ .
ಪಿಂಕಿ ಎಂದರೆ ನಮ್ಮ ಮುದ್ದಿನ ಒಂದು ಸಾಕು ನಾಯಿ .
ಇದರ ಸಾವಾಗಿ ದಿನಾಂಕ ೧೩ ರಂದು ೩ ವರ್ಷ ಕಳೆದವು .
ಇದು ಒಂದು ಪ್ರಾಣಿ .ಆದರೆ ಮನುಷ್ಯರಿಗಿಂತ ಮೇಲು .ರಾಜಕಾರಣ ಮಾಡುವುದಿಲ್ಲ .ಪ್ರೀತಿಸುವುದರಲ್ಲಿ ವಿಶ್ವಾಸದಲ್ಲಿ ಮನುಷ್ಯ ಜಾತಿಗಿಂತ ಮೇಲು.
ಅನ್ನದ ಬದಲಾಗಿ ಪ್ರೇಮ ಕೊಡುತ್ತದೆ .
ನನ್ನ ಹೆಂಡತಿ ಮತ್ತು ನಾನು ನಮ್ಮ ಮನೆಯ ಅವರಣದ ಹಿಂಬಾಗದಲ್ಲಿ ಹೂಳುವಾಗ ಸಾವಿಗಾಗಿ ಅತ್ತೆವು .
ಗರ್ಭ ಕೋಶದ ಕ್ಯಾಂಸೆರ್ ನಿಂದ ಸಾವು ಬಂದು ವೈದ್ಯರ ಪ್ರಯತ್ನ ವಿಫಲ ವಾಗಿ ಕೊನೆಯುಸಿರು ಎಳೆಯಿತು .
ಗಂಗೆಯ ಗಂಗಾಜಲ ಬಾಯಲ್ಲಿ ಸುರಿದು ಮುಂದೆ ಉತ್ತಮ ಜನ್ಮ ಸಿಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸಿದೆವು .
ಬೀದಿಯಲ್ಲಿ ಪಿಂಕಿ ಮನೆ ಎಂದು ಕರೆಯುತ್ತಿದ್ದರು .ಚಿಕ್ಕ ಮಕ್ಕಳು ನಮ್ಮಿಬರನ್ನು ಪಿಂಕಿ ಅಪ್ಪ ಮತ್ತು ಅಮ್ಮ ಎಂದು ಕೇಳಿ ನಿಮಗೆ ನಗು ಬರುತ್ತದೆ ಸಹಜ .ಆದರೆ ಸಾಕು ಪ್ರಾಣಿಯ ಜೊತೆ ಎಷ್ಟು ಸಂಬಂಧ ಹೇಗೆ ಎನ್ನುವುದು ಎಲ್ಲರೂ ತಿಳಿಯಲು ಸಾಧ್ಯವಿಲ್ಲ .
ನಮ್ಮ ಕಾರಿನಲ್ಲಿ ತೀರ್ಥಕ್ಷೇತ್ರ ಮುಂಬೈ ,ಬೆಂಗಳೂರು ,ಪುಣೆ ನೋಡಿದ ವಿಶೇಷ ಪ್ರಾಣಿ ಯಾಗಿತ್ತು .
ಮಗಳಿಗೆ ಪ್ರೀತಿಯಿಂದ ವಾಹನದ ಮುಂದಿನ ಸೀಟಿನಲ್ಲಿ ಕೂರುವ ಮತ್ತು ಪ್ರೀತಿಯ ನಾಯಿ ಇನ್ನೂ ಇಲ್ಲ ಎನ್ನುವ ಬೇಸರ ನಮ್ಮೆಲ್ಲರಿಗೂ ಇಂದಿಗೂ ಕಾಡುತ್ತಿದೆ .ಆದರೆ ನಾವು ವಿಧಿಯ ಆಟ ಒಪ್ಪಲೇ ಬೇಕು .
ನಮ್ಮ ನಾಯಿಯ ಬಗ್ಗೆ ವಿವರಿಸಲು ತುಂಬಾ ವಿಷಯ ಗಳಿದ್ದರೂ ದುಖ ಪೂರಿತ ಮನಸ್ಸಿನವನಾಗಿ ಲೇಖನ ಮುಗಿಸುತ್ತೇನೆ .
ಇಂತಹ ಅನುಭವಗಳು ನನ್ನಂತಹ ಕೆಲವರಿಗೆ ಆಗಿರ ಬಹುದು ಬರೆಯುವ ಮನಸ್ಸು ಮಾಡಿ ಪ್ರಾಣಿ ಪ್ರಿಯರಿಗೆ ದಯವಿಟ್ಟು ತಿಳಿಸಿ .ನಂಬಿಕೆ ದ್ರೋಹ ಮಾಡುವ ರಾಜಕಾರಣಿಗಳನ್ನೂ ಹೋಲಿಸಿದಾಗ ಪ್ರಾಣಿಗಳು ಲೇಸು .
ಸಾಕು ಪ್ರಾಣಿಗಳ ಬಗ್ಗೆ ಗಮನ ವಿರಲಿ .ನಿಮ್ಮ ಬೇಸರ ಕಳೆಯ ಬಹುದು .ಅರೋಗ್ಯ ಸುಧಾರಣೆ ಸತ್ಯ .
ಇದು ನಮ್ಮ ಸುಂದರ ಮೈಸೂರು ಪ್ರಕಟಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ ಕುಟುಂಬ .

Sunday, March 7, 2010

ವ್ಯಕ್ತಿತ್ವ ವಿಕಾಸ ಮಾಲಿಕೆ [ಸಂಗ್ರಹ ]

ಬಾಳು ಹಸನಾಗಲು ಜೀವನ ಶೈಲಿ ಬದಲಾಯಿಸಿ ನೋಡಿ
೧ ಮುಂಜಾನೆ ಬೇಗನೆ ಏಳುವ ಪದ್ಧತಿ ಸುರ್ಯೋದಯಕ್ಕೆ ಮುನ್ನ ಏಳುವುದು
೨ ನಿತ್ಯ ಕರ್ಮಗಳನ್ನು ಮುಗಿಸುವುದು
೩ ಸ್ವಲ್ಪ ಸಮಯ ಆರೋಗ್ಯದ ಕಡೆ ಗಮನ ಕೊಡುವುದು [ಯೋಗಾಸನ ಇತ್ಯಾದಿ ]
೪ ಸಮ ತೂಕದ ಆಹಾರ ಸಸ್ಯಾಹಾರದ ಕಡೆ ಹೆಚ್ಚು ಒಲವು
ಕಚೇರಿ ಕೆಲಸಕ್ಕೆ ಅವಸರ ಅವಸರ ವಾಗಿ ಹೋಗುವ ಕ್ರಮ ಬದಲಾಯಿಸಿ ಹಿಂದಿನ ದಿನವೇ ನಾಳೆ ಏನು ಮಾಡಬೇಕು ಎನ್ನುವ ಪಟ್ಟಿ ಮಾಡಿ ಹ್ರದಯದ ಬಗ್ಗೆ ಮುಂಜಾಗ್ರತೆ ಮಾಡಿಕೊಳ್ಳಿ .
ವಿಶ್ರಾಂತಿ ನೀರು ಗಾಳಿಯ ಕಡೆ ಗಮನ ಕೊಡುವಾಗ ರಾಜಕೀಯ ದಿಂದ ದೂರವಿದ್ದರೆ ಉತ್ತಮ .
ಸಮಯ ಸಿಕ್ಕಿದಾಗ ಪುಸ್ತಕ /ಪತ್ರಿಕೆ ಓದಿ ಜ್ಞಾನ ಭಂಡಾರ ಬೆಳೆಸಿ ಕೊಳ್ಳಿ ಮಿತ್ರರೊಂದಿಗೆ ಹಂಚಿಕೊಳ್ಳಿ .
ವಾಹನ ಓಡಿಸುವಾಗ ನಿಮ್ಮ ಏಕಾಗ್ರತೆ ವಹಿಸಿ ಅಫಘಾತ ವನ್ನು ತಡೆಯಿರಿ .
ಕಡ್ಡಾಯವಾಗಿ ದೇಹಕ್ಕೆ ವಿಶ್ರಾಂತಿ ಕೊಡಿ
ಮಕ್ಕಳು ಹೆತ್ತವರ ಜೊತೆ ಕಾಲ ಕಳೆಯುವುದು ಅವರಿಗೂ ಮನೋರಂಜನೆ ಅವಶ್ಯಕತೆ ಇದೆ ಎನ್ನುವುದು ಮರೆಯದಿರಿ .
ಜೀವನದಲ್ಲಿ ಹಣ ಸಂಪಾದನೆ ಒಂದೇ ಗುರಿಯಲ್ಲ .
ಸ್ವಾರ್ಥವೇ ಮುಖ್ಯವಲ್ಲ ಹಂಚಿ ತಿಂದಾಗ ಸಿಹಿ ಹೆಚ್ಚು .
ತಾಂತ್ರಿಕ ಜೀವನ ದಲ್ಲಿ ಮನುಷ್ಯತ್ವ ಜನರು ಮರೆತಿದ್ದಾರೆ .ಮ್ರಗ ಮತ್ತು ಮನುಷ್ಯರ ನಡುವೆ ಅಂತರ ಕಮ್ಮಿ .
ತಾಳ್ಮೆ ಕಡಿಮೆಯಾಗಿ ಜಗಳ ಪ್ರವ್ರತ್ತಿ ಹೆಚ್ಚುತ್ತಿದೆ .
ಮದುವೆ ಭಂಧನ ವಿವಾಹ ವಿಚ್ಹೆಧನ /ಆತ್ಮ ಹತ್ಯೆ /ಕೊಲೆ ಪ್ರಕರಣ ಪತ್ರಿಕೆ ಗಳಲ್ಲಿ ಓದುತ್ತ ಇದ್ದೇವೆ .
ಸಮಾಜ ಸುಧಾರಣೆ ಸಾಧ್ಯವೇ .
ಚರ್ಚೆ ಮಾತುಕತೆ ಯಿಂದ ಸಮಸ್ಯೆ ಪರಿಹಾರ ವಾಗುವುದಿಲ್ಲವೇ
ತ್ಯಾಗ ಬಲಿದಾನದ ಹೆಸರು ಅಡಗಿ ಹೋಗಿದೆಯೇ
ನಿಧಾನವಾಗಿ ಯೊಚಿಸಿ ಜೀವನ ಶೈಲಿ ಬದಲಾಯಿಸಿ ನೋಡಿ
ಎಲ್ಲರೂ ಸೇರಿ ಭವ್ಯ ಭಾರತದ ನವ ನಿರ್ಮಾಣ ಮಾಡೋಣ ಬನ್ನಿ .
ಜೈ ಹಿಂದ್
ಕುಂದಾಪುರ ನಾಗೇಶ್ ಪೈ

Tuesday, March 2, 2010

ಕನ್ನಡ ಭಾಷೆಯ ಪ್ರಚಾರ /ಅಭಿವ್ರದ್ಧಿ ನಿರೀಕ್ಷೆ .ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ . ಪ್ರವಾಸ ಮಾಡಿರುವ ರಾಷ್ಟ್ರಗಳಲ್ಲಿ ದಕ್ಷಿಣ ಭಾರತದ ಭಾಷೆ ಗಳಾದ ತೆಲುಗು ,ತಮಿಳ್ ಹಾಗೂ