Friday, April 30, 2010

ಕಾರ್ಮಿಕರ ದಿನಾಚಾರಣೆ ಮೇ ೧ ಅರ್ಥ ಪೂರ್ಣ ವಾಗಲೀ

ಕಾರ್ಮಿಕರ ದಿನಾಚರಣೆ ಮೇ ೧ ಆಚರಿಸುವ ಬಗೆ ಮತ್ತು ಉದ್ದೇಶಗಳು .
ಸಂಘಟನೆ ಯಲ್ಲಿ ಶಕ್ತಿ ಇದೆ .
ವಿಶ್ವದಲ್ಲಿ ಜನ ಸಂಖ್ಯೆಯಲ್ಲಿ ಅತೀ ದೊಡ್ಡ ದೇಶ ಚೀನ ಇದು ಮಾದರಿ ಯಾಗಿದೆ .
ಇಲ್ಲಿ ಪ್ರಜೆಗಳು ಮನೆ ಮನೆಯಲ್ಲಿ ತಯಾರಿಸಲ್ಪಟ್ಟ ಸಾಮಗ್ರಿಗಳು ವಿಶ್ವದ ಹೆಚ್ಚಿನ ದೇಶ ಗಳಲ್ಲಿ ಕಡಿಮೆ ಬೆಲೆಯಲ್ಲಿ ಮಾರುತ್ತಾರೆ .ಸರಕುಗಳು ಅಧಿಕ ಸಂಖ್ಯೆಯಲ್ಲಿ ತಯಾರಿಸಿದ್ದು ವಿದೇಶಗಳಲ್ಲಿ ಮಾರಿ ಲಾಭ ಪಡೆಯುತ್ತಾರೆ .ಇ ದೇಶದ ಜನರು ಶ್ರಮ ಜೀವಿಗಳು .
ನಮ್ಮ ಭಾರತದಲ್ಲಿ ಇವರ ಸಾಮಗ್ರಿ ಗಳು ಕಮ್ಮಿ ಬೆಲೆಯಲ್ಲಿ ಸಿಗುತ್ತದೆ .
ತಾತ್ಪರ್ಯ : ದುಡಿಮೆಯಲ್ಲಿ ಸಂತಸವಿದೆ ಹಾಗೂ ಹಣ ಸಂಪಾದನೆ ಇದೆ .
ಇ ಗುರಿಯನ್ನು ಕಾರ್ಮಿಕರ ದಿನಾಚರಣೆಯಲ್ಲಿ ಪ್ರತಿಯೊಬ್ಬ ನಾಗರೀಕನು ಗಮನಿಸ ಬೇಕು .
ಕೇವಲ ರಜಾದಿನ ವೆಂದು ಮನೆಯಲ್ಲಿ ಟಿವಿಯ ಮುಂದೆ ಕೂತು ಅಥವಾ ಚಲನ ಚಿತ್ರ ಗಳಲ್ಲಿ ಕಾಲ ಕಳೆಯುವುದು ಸರಿಯಲ್ಲ .ಎಲ್ಲಾ ಕಾರ್ಮಿಕರು ಒಂದು ಕಡೆ ಸೇರಿ ತಮ್ಮ ಉದ್ಯೋಗ ದಲ್ಲಿ ದುಡಿಯುವ ಮತ್ತು ಅಧಿಕ ಲಾಭ ಬರಲು ಹೇಗೆ ಬದಲಾವಣೆ ತರಬಹುದು.ಕಾರ್ಮಿಕರ ಕುಟುಂಬಕ್ಕೆ ಎನು ಅಗತ್ಯವಿದೆ .ಅದು ಮಾಲೀಕ/ಸರಕಾರದಿಂದ ಪಡೆಯಲು ಹೇಗೆ ಸಾಧ್ಯವಿದೆ ? ಎನ್ನುವ ಚಿಂತನೆ ಮಾಡಿ ಕಾರ್ಯಕ್ರಮ ಹಾಕ ಬೇಕು .ಇ ದಿನಾಚರಣೆ ಒಂದು ದಿನಕ್ಕೆ ಸೀಮಿತ ವಾಗದೆ ಕಷ್ಟ ಪಟ್ಟು ದುಡಿಯುವ ಪ್ರವ್ರತ್ತಿ ವರ್ಷ ಪೂರ್ತಿ ಇರಬೇಕು .
ಚಳವಳಿಗಳು ನ್ಯಾಯ ಸಮ್ಮತ ವಾಗಿರ ಬೇಕು .ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ನಡೆದು ಕೊಂಡು
ಭವ್ಯ ಭಾರತದ ನವ ನಿರ್ಮಾಣ ಮಾಡಬೇಕು .ಮಾಡುವ ಕೆಲಸದಲ್ಲಿ ಸಂತೋಷ ,ಸಂತ್ರಪ್ತಿ ಇರುವಾಗ
ನಮ್ಮ ತಾಯಿನಾಡು ಸುಭಿಕ್ಷ ಆಗುವುದರಲ್ಲಿ ಸಂದೇಹವಿಲ್ಲಾ.
ಕಾರ್ಮಿಕರ ದಿನಾಚರಣೆ ಅರ್ಥಪೂರ್ಣ ವಾಗಲೀ ದೇಶ ಪ್ರಗತಿ ಪತದತ್ತ ಸಾಗಲಿ ಎಂದು ಸದಾ ಹಾರೈಸುವ
ನಿವ್ರತ್ತ ಬ್ಯಾಂಕ್ ಅಧಿಕಾರಿ ಮತ್ತು ಮಾಜಿ ಪದಾಧಿಕಾರಿ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ
ಕುಂದಾಪುರ ನಾಗೇಶ್ ಪೈ

Friday, April 23, 2010

ಜನ್ಮ ದಿನದ ಶುಭಾಶಯಗಳು

ಕನ್ನಡಿಗರ ಕಣ್ಮಣಿ ವರ ನಟ ನಟ ಸಾರ್ವಬೌಮ ಡಾರಾಜ್ ಕುಮಾರ್ ರಿಗೆ ,ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು .ಕನ್ನಡಕ್ಕಾಗಿ ರಾಜಕೀಯ ಪ್ರವೇಶ ಮಾಡದೇ ,ಪ್ರಚಾರ ಮತ್ತು ಅಭಿವ್ರದ್ಧಿ ಕೊನೆಯ ಗಳಿಗೆ ಯಲ್ಲೂ ಕನ್ನಡ ಬಾವುಟ ಹಾರಿಸಿದ ಮೇರು ನಟ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Sunday, April 11, 2010

ಕಳೆದು ಹೋಗಿದೆ ದಯವಿಟ್ಟು ಹುಡುಕಲು ಸಹಾಯ ಮಾಡಿ

ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ
ವ್ಯಕ್ತಿತ್ವ ವಿಕಾಸ ಮಾಲಿಕೆ ಮುಂದುವರಿಯುವುದು .
ವಿಷಯ : ಕಳೆದು ಹೋಗಿದೆ ದಯವಿಟ್ಟು ಹುಡುಕಿ ಕೊಡಿ.
ತಿಳಿಸಿ ಸಂಪರ್ಕ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು .
೩ ಚಂದನ ವಾಹಿನಿ ಸಂಪರ್ಕ ಸೇತು [ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಇಳಿ ವಯಸ್ಸಿನ ಅಜ್ಜಿ ಕೋಲು ಊರಿ ಬಗ್ಗಿ ನಡೆದು ಪಕ್ಕದ ದೇವಸ್ಥಾನಕ್ಕೆ ಹೋಗುವಾಗ ಶಾಲೆಗೆ ಹೋಗುವ ಬಾಲಕ ತಮಾಷೆ ಮಾಡಲು [ಅಜ್ಜಿ ಅಜ್ಜಿ ಬಗ್ಗಿ ಎನು ಹುಡುಕು ತ್ತಿಯ ಎಂದು ಪ್ರಶ್ನಿಸಿದ ]
ಜಾಣ ಅಜ್ಜಿ [ಮರಿ ಕಳೆದು ಹೋಗಿದೆ ಹುಡುಕುತ್ತಿದ್ದೇನೆ ]
ಹುಡುಗ [ಎನು ಕಳೆದಿದೆ ನಾನು ಸಹಾಯ ಮಾಡಲೇ ]
ಅಜ್ಜಿ [ನನ್ನ ಬಾಲ್ಯ ,ಸೌಂದರ್ಯ ಅರೋಗ್ಯ ಮತ್ತು ಸಂಪತ್ತು ಎಲ್ಲಾ ಕಳೆದಿದೆ ಸ್ವಲ್ಪ ಪುನಃ ಸಿಗುವ ಹಾಗೇ ಮಾಡು ಮರಿ ]
ಹುಡುಗ ಮರು ಮಾತಾಡದೆ ಕಂಬಿ ಕಿತ್ತ .
ಅಜ್ಜಿ ದೇವಸ್ಥಾನದ ಕಡೆ ನಡೆದಳು .[ಮನಸ್ಸಿನಲ್ಲಿ ದೇವರೇ ಇ ಮಕ್ಕಳಿಗೆ ಒಳ್ಳೆ ಬುದ್ಧಿ ಕೊಡು ]
ತಾತ್ಪರ್ಯ ;
ಅಜ್ಜಿಗೆ ಮಕ್ಕಳ ಮತ್ತು ಮರಿ ಮಕ್ಕಳ ಮೇಲೆ ಇನ್ನೂ ಮಮತೆ ,ಕಾಳಜಿ ಇದೆ .
ಆದರೆ ಮಕ್ಕಳು ಹೆತ್ತವರನ್ನು ವ್ರದ್ಧಾಶ್ರಮದ ದಾರಿ ತೋರಿಸುತ್ತಾರೆ .
ಕಳೆದು ಹೋದ ಜೀವನ ಮತ್ತೆ ಪಡೆಯಲು ಸಾಧ್ಯವಿಲ್ಲ .
ವಿದೇಶ ದೇಶ ಗಳಲ್ಲಿ ಹೆತ್ತವರನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಲು ಪ್ರಯತ್ನಿಸುತ್ತಾರೆ.
ಉದ್ಯೋಗ ದಲ್ಲಿ ಇರುವಾಗ ,ನಡತೆ ,ಪರಸ್ಪರ ಹೊಂದಾಣಿಕೆ ,ಆಸಕ್ತಿ ಇತ್ಯಾದಿ ಎಲ್ಲಿ ಹೋಗಿದೆ .
ಅಂತರ್ಜಲ ಯುಗದಲ್ಲಿ ಕೇವಲ ಯಾಂತ್ರಿಕ ಯುಗದಲ್ಲಿ ಮಾನವೀಯತೆ ,ದೇವರು ಗುರು ಹಿರಿಯರ ಮೇಲಿನ ಭಯ ,ಭಕ್ತಿ ,ಶಿಸ್ತಿನ ಜೀವನ ಸಮಯ ಪ್ರಜ್ಞೆ ಹೀಗೆ ಹಲವು ವಿಷಯಗಳು ಶಬ್ದ ಕೋಶದಲ್ಲಿ ಉಳಿದು ನಿಜ ಜೀವನದಲ್ಲಿ ಕಳೆದು ಹೋಗಿದೆ .ಆದರೂ ನಮಗೆ ಯುವ ಜನತೆಯ ಮೇಲೆ ಪುನಃ ಉದಯವಾಗುವ ಆಶಾಕಿರಣ ಮತ್ತು ನಂಬಿಕೆ ಇನ್ನೂ ಜೀವಂತ ವಾಗಿದೆ .
ಕಾದು ನೋಡೋಣ .
ಕುಂದಾಪುರ ನಾಗೇಶ್ ಪೈ .